ಸುಗ್ಗಿ – ದಾ. ರಾ. ಬಳೂರಗಿ ಯವರ ಪದ್ಯ

ಸುಗ್ಗಿ

ಸುಗ್ಗಿಯು ಬಂದಿತು ಹಿಗ್ಗನು ತಂದಿತು
ನಮ್ಮಯ ನಾಡಿನ ಜನಕೆಲ್ಲ |

ಸಗ್ಗದ ಸುಖವನು ನೀಡುತ ರೈತಗೆ
ದುಡಿಯಲು ಹಚ್ಚಿತು ದಿನವೆಲ್ಲ |

ಬೆಳೆಸಿಯೆ ತಿನ್ನುತ ಮಜ್ಜಿಗೆ ಕುಡಿಯುತ
ಇರುವರು ರೈತರು ಸುಖದಲ್ಲಿ |

ಜೋಳವ ಕೊಯ್ಯುತ ಗೂಡನು ಹಾಕುತ
ಕುಣಿವರು ರೈತರು ಹೊಲದಲ್ಲಿ |

ಕಣವನು ಕಡಿಯುತ ನೀರನು ಹೊಡೆಯುತ
ಮೇಟಿಯ ಕುಣಿಯನು ಅಗೆಯುವರು |

ತೆನೆಯನು ಮುರಿಯುತ ಹೆಸರನು ಹೇಳುತ
ಗುಂಪಿಯ ನೆಳೆಯುತ ಒಗೆಯುವರು |

ಹಂತಿಯ ಹೊಡೆಯುತ ಕಂತಿಯ ತೆಗೆಯುತ
ಬೆಳಗಿನ ವರೆಗೂ ಹಾಡುವರು |

ಕಾಳನು ತೂರುತ ಗಾಡಿಲಿ ಹೇರುತ
ಊರಿನ ಕಡೆಗೆ ಓಡುವರು


ಈ ಪದ್ಯ ಸುಗ್ಗಿ ಅಥವಾ ಹರವುಗಾಲದ ಆನಂದ ಮತ್ತು ರೈತರ ಹರುಷವನ್ನು ಬಿಂಬಿಸುತ್ತದೆ. ಇದು ರೈತರು ಬೆಳೆಯ ಕಟಾವು, ಕಸಿ, ಕೊಯ್ಲು ಮತ್ತು ಇತರ ಕೃಷಿ ಕಾರ್ಯಗಳಲ್ಲಿ ತೊಡಗುತ್ತಾ ಹಾಗೂ ಸಂತೋಷದಿಂದ ಹಾಡುತ್ತಾ, ಆಚರಿಸುತ್ತಾ ಇರುವ ವರ್ಣನೆಯನ್ನು ನೀಡುತ್ತದೆ. ಅವರು ಸಸ್ಯಗಳನ್ನು ಬೆಳೆಸಿ, ತಿನಿಸು-ಪಾನೀಯಗಳನ್ನು ಸೇವಿಸುತ್ತಾ, ತಮ್ಮ ದೈನಂದಿನ ಕೃಷಿ ಕೆಲಸಗಳಲ್ಲಿ ಸುಖವಾಗಿ ಇರುವರು.

Leave a Reply

Your email address will not be published. Required fields are marked *